ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಮಂಗಳೂರು: ಸೆ.27ರಂದು ಜಾರ ಶ್ರೀ ಜಾರಂದಾಯ ದೈವಸ್ಥಾನದ ನೂತನ ಕೊಡಿ ಮರ ಮೆರವಣಿಗೆ


ಮಂಗಳೂರು, ಸೆ.26: ಆದಿ ಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನ, ಜಾರ ಮೂಡುಶೆಡ್ಡೆಯಲ್ಲಿ ನೂತನ ಕೊಡಿ ಮರದ ಭವ್ಯ ಮೆರವಣಿಗೆಯನ್ನು ಸೆಪ್ಟೆಂಬರ್ 27, ಶನಿವಾರ ಸಂಜೆ 5 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಮ ಭಜನಾ ಮಂದಿರ, ನಿಸರ್ಗ ಧಾಮದಿಂದ ಆರಂಭವಾಗುವ ಈ ಮೆರವಣಿಗೆ ಜಾರ ದೈವಸ್ಥಾನದವರೆಗೆ ಸಾಗಲಿದೆ. ಸತ್ಯನಾಥ ಸೇವಾ ಬಳಗ ಜಾರ ಅವರ ಸಹಕಾರದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
ಜತ್ತಿ ಪೂಜಾರಿ ಮತ್ತು ಜಾರಮನೆ ಕುಟುಂಬಸ್ಥರು ಹಾಗೂ ಜಾರಂದಾಯ ಸೇವಾ ಸಮಿತಿ ವತಿಯಿಂದ “ದೈವದ ಕೃಪೆಗೆ ಪಾತ್ರರಾಗಲು ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಳ್ಳಬೇಕು” ಎಂದು ಕೋರಲಾಗಿದೆ.
Previous Post Next Post