Top News

RSS ವಿರುದ್ಧ ಮಾತನಾಡಿದರೆ ಪ್ರಿಯಾಂಕ್ ಖರ್ಗೆ ಮನೆಯೊಳಗೂ ಕಾರ್ಯಕರ್ತರು ನುಗ್ಗಬಹುದು ; ಬಿಜೆಪಿ ನಾಯಕ ಮಣಿಕಂಠ ರಾಠೋಡ್‌ ಎಚ್ಚರಿಕೆ

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಫೋನ್‌ ಕರೆಗಳು ಬಂದಿರುವುದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಣಿಕಂಠ ರಾಠೋಡ್‌ ಅವರು, “ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೇ ರೀತಿಯ ಮಾತು ಮುಂದುವರಿಸಿದರೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಅವರ ಮನೆಗೂ ಬರಬಹುದು. ಅವರು ಎಚ್ಚರಿಕೆಯಿಂದಿದ್ದು, ಆರ್‌ಎಸ್‌ಎಸ್‌ಗೆ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರ್‌ಎಸ್‌ಎಸ್‌ ಒಂದು ದೇಶಭಕ್ತಿಯ ಕಟ್ಟರ್‌ ಸಂಘಟನೆ. ಸರ್ಕಾರ ಅದಕ್ಕೆ ನಿಷೇಧ ಹೇರುವ ನಿರ್ಧಾರ ಕೈಗೊಂಡರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ” ಎಂದರು.

ಅವರು ಮುಂದುವರೆದು, “ಆರ್‌ಎಸ್‌ಎಸ್‌ ಬಗ್ಗೆ ಸಚಿವರು ಮಾತನಾಡಿದಾಗ ಬಿಜೆಪಿ ರಾಜ್ಯಾಧ್ಯಕ್ಷರು ತಕ್ಷಣ ಬೃಹತ್ ಪ್ರತಿಭಟನೆ ರೂಪಿಸಿ ಸಚಿವರ ಮನೆಗೆ ಮುತ್ತಿಗೆ ಹಾಕಬೇಕಿತ್ತು. ನಾನು ಅಧ್ಯಕ್ಷನಾಗಿದ್ದರೆ ಅದು ಖಚಿತವಾಗಿ ಮಾಡುತ್ತಿದ್ದೆ” ಎಂದು ರಾಠೋಡ್‌ ಹೇಳಿದರು.

#Rss #karnataka #kalaburgi #manikantharathode #priyankkharge 

Post a Comment

Previous Post Next Post