ಮಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ – 2025ರ ಪ್ರಧಾನ (ಪ್ರಬುದ್ಧ) ಕವಿಗೋಷ್ಠಿಗೆ ಸಾಹಿತಿ ಹಾಗೂ ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರಘು ಇಡ್ಕಿದು ಆಯ್ಕೆಯಾಗಿದ್ದಾರೆ.
ತುಳು ಹಾಗೂ ಕನ್ನಡದಲ್ಲಿ 32 ಕೃತಿಗಳನ್ನು ಪ್ರಕಟಿಸಿರುವ ರಘು ಇಡ್ಕಿದು ಅವರು ಕಥೆ, ಕವನ, ನಾಟಕ, ವಿಮರ್ಶೆ, ರೂಪಕ, ಅನುವಾದ, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಅಂಕಣ ಬರಹ, ಭಾವಗೀತೆ, ಗಜಲ್ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಕ್ರಿಯರಾಗಿದ್ದಾರೆ.
ಸೆಪ್ಟೆಂಬರ್ 27ರಂದು ನಡೆಯಲಿರುವ ಪ್ರಧಾನ ಕವಿಗೋಷ್ಠಿಯಲ್ಲಿ ಅವರು ತುಳುನಾಡನ್ನು ಪ್ರತಿನಿಧಿಸಿ ತುಳು ಕವನವನ್ನು ಪ್ರಸ್ತುತಪಡಿಸಲಿದ್ದಾರೆ.